ತಿಥಿ ಕಾರ್ಯಕ್ರಮಕ್ಕೆ ಆಮೆ ಬೇಟೆ – ಬೆಳ್ತಂಗಡಿ ಪೊಲೀಸರ ದಾಳಿ, ನಾಲ್ವರ ಬಂಧನ

ಬೆಳ್ತಂಗಡಿ, ಫೆ.14: ತಿಥಿ ಕಾರ್ಯಕ್ರಮದಲ್ಲಿ ವಿಶೇಷ ಪದಾರ್ಥವಾಗಿ ಆಮೆ ಮಾಂಸ ಬಡಿಸಲು ಅಕ್ರಮವಾಗಿ ಬೇಟೆಯಾಡುತ್ತಿದ್ದ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಬಂಧಿಸಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ

ಅಜ್ಜಿ ದೇವಮ್ಮ ಅವರ ಉತ್ತರಕ್ರಿಯೆ ಕಾರ್ಯಕ್ರಮದ ನಿಮಿತ್ತ ಫೆಬ್ರವರಿ 13ರಂದು ಸಂಬಂಧಿಕರು ಬೆಳ್ತಂಗಡಿಗೆ ಆಗಮಿಸಿದ್ದರು. ಅಜ್ಜಿಗೆ ಇಷ್ಟವಾದ ಆಮೆ ಪದಾರ್ಥವನ್ನು ತಿಥಿ ಕಾರ್ಯಕ್ರಮದಲ್ಲಿ ಬಡಿಸಲು ನಿರ್ಧರಿಸಿದ ಅವರು, ಫೆಬ್ರವರಿ 14ರಂದು ಮಧ್ಯಾಹ್ನ ಬೆಳ್ತಂಗಡಿ ನಗರದ ಸೋಮವತಿ ನದಿಗೆ ತೆರಳಿ ಅಕ್ರಮವಾಗಿ ನಾಲ್ಕು ಆಮೆಗಳನ್ನು ಬೇಟೆಯಾಡಿದ್ದಾರೆ.ನದಿ ತೀರದಲ್ಲಿ ಆಮೆಗಳನ್ನು ಸುಟ್ಟು ಮಾಂಸ ಮಾಡಲು ಯತ್ನಿಸುತ್ತಿದ್ದ ವೇಳೆ, ಖಚಿತ ಮಾಹಿತಿ ಆಧರಿಸಿ ಫೆ.14 ರಂದು ಸಂಜೆ ಸುಮಾರು 3.30ಕ್ಕೆ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ಅವರ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು. ದಾಳಿಯಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ ನಾಲ್ಕು ಸುಟ್ಟ ಆಮೆಗಳನ್ನು ಜಪ್ತಿ ಮಾಡಲಾಯಿತು.ನಂತರ ಪ್ರಕರಣವನ್ನು ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳು ಮಹಜರು ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡರು. ವಿಚಾರಣೆ ನಡೆಸಿದ ಬಳಿಕ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಅದೇ ದಿನ ರಾತ್ರಿ ಬಿಡುಗಡೆ ಮಾಡಲಾಗಿದೆ.ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ ಹಾಗೂ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ ಮಾರ್ಗದರ್ಶನ ನೀಡಿದರು. ಸಬ್ ಇನ್ಸ್‌ಪೆಕ್ಟರ್ ಆನಂದ್.ಎಮ್ ನೇತೃತ್ವದಲ್ಲಿ ಎಎಸ್‌ಐ ಕುಶಾಲಪ್ಪ, ಹೆಡ್ ಕಾನ್ಸ್ಟೇಬಲ್ ಪ್ರಮೋದ್, ಪಂಪಾಪತಿ, ಪ್ರಕಾಶ್, ಶ್ವೇತಾ, ಸವಿತಾ ಹಾಗೂ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಡಿ.ಆರ್.ಎಫ್.ಒ ಕಿರಣ್ ಪಾಟೀಲ್, ಸಂದೀಪ್, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ದಿವಾಕರ್ ಮತ್ತು ವಾಹನ ಚಾಲಕ ಕುಶಾಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಘಟನೆಗಳು ಪರಿಸರ ಮತ್ತು ಜೈವ ವೈವಿಧ್ಯತೆಗೆ ಅಪಾಯಕಾರಿಯಾಗಿದೆ.

ವರದಿ : ಕೆರೇಹಳ್ಳಿ ಅಂಜನ್

  • malnadsuddi36@gmail.com

    ಮಲ್ನಾಡ್ ಸುದ್ದಿ ಇದು ಕೇವಲ ಸುದ್ದಿ ವಾಹಿನಿಯಲ್ಲ ಮಲ್ನಾಡ್ ಸುದ್ದಿ ಇದು ಮಲೆನಾಡ ಜನರ ಧ್ವನಿ ಜನರೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಮಲ್ನಾಡ್ ಸುದ್ದಿ ತಂಡ ನೈಜ್ಯ ಅಪರಾಧ. ಪ್ರಸ್ತುತ ರಾಜಕೀಯ. ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ. ಅನ್ಯಾಯದ ವಿರುದ್ಧ ಹೋರಾಟ. ಉಚಿತ ಕಾನೂನು ಸಲಹೆ. ಸಿನಿಮಾ ಸ್ಟೋರಿಗಳು. ಸರ್ಕಾರದ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ. ಒಟ್ಟಾರೆಯಾಗಿ ಸಮಾಜವನ್ನು ಸುಧಾರಿಸುವುದು ನಮ್ಮ ಮಲ್ನಾಡ್ ಸುದ್ದಿ ತಂಡದ ಗುರಿ

    Related Posts

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    Despite the government releasing funds for the construction of a well in Kudumallige Gram Panchayat limits of Thirthahalli taluk, money has been collected from the villagers ತೀರ್ಥಹಳ್ಳಿ : ತಾಲೂಕಿನ ಕುಡುಮಲ್ಲಿಗೆ…

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    Shivamogga: Kuruvalli Nagaraj has been appointed as the General Secretary of the Shivamogga District Congress Backward Classes (Youth Wing) unit. ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಯುವ ಸಂಘಟನೆ) ಘಟಕದ ಪ್ರಧಾನ…

    Leave a Reply

    Your email address will not be published. Required fields are marked *

    You Missed

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    ಚಿನ್ನ ಕಳವು ಆರೋಪಿ ಬಂಧನ 30 ಗ್ರಾಂ ಚಿನ್ನದ ಗಟ್ಟಿ ಪೊಲೀಸರ ವಶಕ್ಕೆ

    ಫೇಸ್ಬುಕ್ ಇನ್ಸ್ಟಾಗ್ರಾಮ್ ಮೂಲಕ ಹನಿ ಟ್ರ್ಯಾಪ್ ಪ್ಯಾಷನ್ ಡಿಸೈನರ್ ಬಂಧನ:

    ಟ್ರಾಕ್ಟರ್ ಪಲ್ಟಿ: ಬಾಲಕ ಸ್ಥಳದಲ್ಲೇ ಸಾವು

    ಹನಿ ಟ್ರಾಪ್. ಆರೋಪಿ ಗಳ ಬಂಧನ