ಕಳೆದುಹೋದ ಮೊಬೈಲ್ ಪತ್ತೆ: ಹೊಸನಗರ ಪೊಲೀಸರ ಚಾಣಾಕ್ಷ ಕಾರ್ಯಕ್ಕೆ ಶ್ಲಾಘನೆ

Posted by

ಹೊಸನಗರ : ತರಕಾರಿ ಅಂಗಡಿಯ ಸುಧೀಂದ್ರ ಪಂಡಿತ್ ಅವರ ಮೊಬೈಲ್ ಫೋನ್ ಮಾರ್ಚ್ 20ರಂದು ಕಳೆದುಹೋಗಿದ್ದು, ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು.

ದೂರನ್ನು ಆಧರಿಸಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿ, ಚಾಣಾಕ್ಷತೆಯಿಂದ ಮೊಬೈಲ್ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸನಗರದಲ್ಲಿ ಕಳೆದುಹೋಗಿದ್ದ ಮೊಬೈಲ್ ನಂಜನಗೂಡಿನಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.ಪತ್ತೆಯಾದ ಮೊಬೈಲ್ ಅನ್ನು ಪೊಲೀಸರು ಸುಧೀಂದ್ರ ಪಂಡಿತ್ ಅವರಿಗೆ ಹಸ್ತಾಂತರಿಸಿದ್ದು, ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಪೊಲೀಸರ ವೇಗವಾದ ಹಾಗೂ ಪರಿಣಾಮಕಾರಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *