ರಿಪ್ಪನಪೇಟೆ ಗಾಂಧಿ ನಗರದಲ್ಲಿ ಸಂಪ್ರದಾಯಬದ್ಧವಾಗಿ ಹೋಳಿ ಹುಣ್ಣಿಮೆ ಆಚರಣೆ

ರಿಪ್ಪನಪೇಟೆಯ ಗಾಂಧಿ ನಗರದಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ನಿನ್ನೆ ರಾತ್ರಿ ಸುಮಾರು 10:30 ಗಂಟೆಗೆ ಗಾಂಧಿ ನಗರದಲ್ಲಿ ಕಾಮಣನನ್ನು ಪ್ರತಿಷ್ಠಾಪಿಸಿ ನಂತರ ಸಂಪ್ರದಾಯದಂತೆ ಕಾಮಣನನ್ನು ಸುಡಲಾಯಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಾಂಧಿ ನಗರದಲ್ಲಿ ಯುವಕರು, ಗ್ರಾಮಸ್ಥರು ಮತ್ತು ಸಾರ್ವಜನಿಕರು ಸೇರಿ ಘೋಷಣೆಗಳನ್ನು ಕೂಗುತ್ತಾ ಕಾಮಣನನ್ನು ಸುಟ್ಟು ಹಬ್ಬವನ್ನು ಆಚರಿಸಿದರು.

ಹಬ್ಬದ ವಾಡಿಕೆಯಂತೆ ಪ್ರತಿಯೊಂದು ಮನೆಯಲ್ಲಿಗೂ ತೆರಳಿ ಕಟ್ಟಿಗೆ ಹಾಗೂ ಎಣ್ಣೆಯನ್ನು ಸಂಗ್ರಹಿಸಿ ಕಾಮಣನನ್ನು ಸಿದ್ಧಪಡಿಸಲಾಗುತ್ತದೆ. ನಂತರ ರಾತ್ರಿ ಕಾಮಣನನ್ನು ಸುಡುವ ಮೂಲಕ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಮಾರನೆಯ ದಿನ ಬೆಳಿಗ್ಗೆ ಗ್ರಾಮಸ್ಥರು ಹಾಗು ಸಾರ್ವಜನಿಕರು ಸೇರಿ ಹೋಳಿ ಆಡುತ್ತ ಪರಸ್ಪರ ಬಣ್ಣ ವನ್ನ ಹೊಚ್ಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಪದ್ಧತಿ ಇದೆ.

ಹೋಳಿ ಹಬ್ಬವು ಹಿಂದೆ ಮಲೆನಾಡು ಭಾಗದ ಹಲವೆಡೆ ಸಂಭ್ರಮದಿಂದ ನಡೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ನಿಧಾನವಾಗಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಕೆಲ ವರ್ಷಗಳ ಹಿಂದೆ ರಿಪ್ಪನಪೇಟೆಯ ಬಹುತೇಕ ಎಲ್ಲಾ ಭಾಗಗಳಲ್ಲೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿತ್ತು. ಆದರೆ ಈಗ ಕೇವಲ ಕೆಲವೇ ಪ್ರದೇಶಗಳಲ್ಲಿ ಮಾತ್ರ ಈ ಹಬ್ಬ ನಡೆಯುತ್ತಿದೆ.ಆದರೆ ಗಾಂಧಿ ನಗರದಲ್ಲಿನ ಜನರು ತಮ್ಮ ಪೂರ್ವಜರಿಂದ ಬಂದ ಸಂಪ್ರದಾಯವನ್ನು ಇಂದಿಗೂ ಕಾಪಾಡಿಕೊಂಡು ಹೋಳಿ ಹುಣ್ಣಿಮೆಯನ್ನು ಆಚರಿಸುತ್ತಿರುವುದು ವಿಶೇಷವಾಗಿದೆ. ಪ್ರತಿವರ್ಷವೂ ಗಾಂಧಿ ನಗರದಲ್ಲಿ ಹೋಳಿ ಹಬ್ಬವು ಸಂಭ್ರಮದಿಂದ ನಡೆಯುತ್ತಿದ್ದು, ಸ್ಥಳೀಯರ ಸಂಪ್ರದಾಯ ಪ್ರೀತಿಯನ್ನು ತೋರಿಸುತ್ತದೆ.

ವರದಿ : ಕೆರೆಹಳ್ಳಿ ಅಂಜನ್

  • malnadsuddi36@gmail.com

    ಮಲ್ನಾಡ್ ಸುದ್ದಿ ಇದು ಕೇವಲ ಸುದ್ದಿ ವಾಹಿನಿಯಲ್ಲ ಮಲ್ನಾಡ್ ಸುದ್ದಿ ಇದು ಮಲೆನಾಡ ಜನರ ಧ್ವನಿ ಜನರೊಂದಿಗೆ ಸೇರಿ ಅನ್ಯಾಯದ ವಿರುದ್ಧ ಹೋರಾಡುವುದು ನಮ್ಮ ಮಲ್ನಾಡ್ ಸುದ್ದಿ ತಂಡ ನೈಜ್ಯ ಅಪರಾಧ. ಪ್ರಸ್ತುತ ರಾಜಕೀಯ. ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ. ಅನ್ಯಾಯದ ವಿರುದ್ಧ ಹೋರಾಟ. ಉಚಿತ ಕಾನೂನು ಸಲಹೆ. ಸಿನಿಮಾ ಸ್ಟೋರಿಗಳು. ಸರ್ಕಾರದ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ. ಒಟ್ಟಾರೆಯಾಗಿ ಸಮಾಜವನ್ನು ಸುಧಾರಿಸುವುದು ನಮ್ಮ ಮಲ್ನಾಡ್ ಸುದ್ದಿ ತಂಡದ ಗುರಿ

    Related Posts

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    Despite the government releasing funds for the construction of a well in Kudumallige Gram Panchayat limits of Thirthahalli taluk, money has been collected from the villagers ತೀರ್ಥಹಳ್ಳಿ : ತಾಲೂಕಿನ ಕುಡುಮಲ್ಲಿಗೆ…

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    Shivamogga: Kuruvalli Nagaraj has been appointed as the General Secretary of the Shivamogga District Congress Backward Classes (Youth Wing) unit. ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ (ಯುವ ಸಂಘಟನೆ) ಘಟಕದ ಪ್ರಧಾನ…

    Leave a Reply

    Your email address will not be published. Required fields are marked *

    You Missed

    ಬಾವಿ ಅನುದಾನದ ಹಣ ಇದ್ದರೂ ಗ್ರಾಮಸ್ಥರಿಂದ 60000 ಹಣ ವಸೂಲಿ:

    ಶಿವಮೊಗ್ಗ ಹಿಂದುಳಿದ ವರ್ಗಗಳ ಕುರುವಳ್ಳಿ ನಾಗರಾಜ್ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ:

    ಚಿನ್ನ ಕಳವು ಆರೋಪಿ ಬಂಧನ 30 ಗ್ರಾಂ ಚಿನ್ನದ ಗಟ್ಟಿ ಪೊಲೀಸರ ವಶಕ್ಕೆ

    ಫೇಸ್ಬುಕ್ ಇನ್ಸ್ಟಾಗ್ರಾಮ್ ಮೂಲಕ ಹನಿ ಟ್ರ್ಯಾಪ್ ಪ್ಯಾಷನ್ ಡಿಸೈನರ್ ಬಂಧನ:

    ಟ್ರಾಕ್ಟರ್ ಪಲ್ಟಿ: ಬಾಲಕ ಸ್ಥಳದಲ್ಲೇ ಸಾವು

    ಹನಿ ಟ್ರಾಪ್. ಆರೋಪಿ ಗಳ ಬಂಧನ